Thursday, June 24, 2010

ಪ್ರಕಾಶ್ ರೈರವರ ಸಂವಾದಕ್ಕೆ ನನ್ನ ಅನಿಸಿಕೆ

ನನ್ನ ಅನಿಸಿಕೆಯನ್ನು ಹೇಳಬೇಕೆಂದರೆ ಶೇಖರ್ ಪೂರ್ಣರವರು ಸಂವಾದದ ಆರಂಭದಿಂದ ಅಂತ್ಯದವರೆಗೆ ಪ್ರಕಾಶ್ ರವರ ಕಾಲೆಳೆಯಲೇಬೇಕೆಂದು ಸಂವಾದವನ್ನು ಆಯೋಜಿಸಿರುವಂತೆ ಕಂಡಿತು..

ಅವರು ಹೇಳಿದ ಅಸಂಭದ್ದ ಮಾತುಗಳು "ನಮಗೆ ಪ್ರಕಾಶ್ ರೈ ಬೇಡ", "ಪ್ರಕಾಶ್ ರವರಿಗೆ ಅಹಂಕಾರ ದರ್ಪ ತುಂಬಾ ಇದೆ".. "ನಿಮ್ಮ ಗೌರವಕ್ಕೆ ಕುಂದು ಬರಿಸುವುದಿಲ್ಲ" Text ಯಾಕೇ ಬಳಸಿಲ್ಲ"..
ಈ ಮಾತುಗಳು ಕೇಳಿ ನೋಡುಗರು ಕೆರಳಲಿಲ್ಲ ಸದ್ಯಕ್ಕೆ.. Text ಅನ್ನೋ ಪದ ಹಿಡಿದು ಎಳೆದಾಡಿ ಕೇಳುಗರ ಸಮಯ ಹಾಳು ಮಾಡಿದ್ದು ನಿಜ, ಅದು ಯಾರಿಗೂ ಅರ್ಥವಾಗಲಿಲ್ಲ ಕೂಡ.. ಸ್ವಾಮಿ ಇದೊಂದು ಸಾಧಾರಣ ಸಂವಾದ.. ಅಂತಹದಕ್ಕೆ ಅವರು ಬಂದದ್ದು ಭಾಗ್ಯವೇ ಸರಿ.. ಅವರಿಗಿರುವ Fan list ಹೇಳುತ್ತಾ ಹೋದರೆ ಈ Comment ಸಾಕಾಗುವುದಿಲ್ಲ.. ಅವರಿಗೆ ಕಸಿವಿಸಿ ಉಂಟು ಮಾಡಿದ್ದು ಹಾಗು ಅವರ ಮಾತು ಕೋಪದಿಂದ ಕೂಡಿದಂತೆ ಮಾಡಿದ್ದು ಒಳ್ಳೆಯದಲ್ಲ.. ಚಿತ್ರದಲ್ಲಿ ತಪ್ಪಿದಲ್ಲಿ ಆರೋಗ್ಯಪೂರ್ಣವಾಗಿ ಹೇಳಬೇಕಾದದ್ದು ಒಳ್ಳೆಯ ಲಕ್ಷಣ.. ಒಬ್ಬ ಪ್ರಖ್ಯಾತ ನಟನನ್ನು ಅವಮಾನಿಸಿ ಕೆರಳಿಸಿದಂತಿತ್ತು.. ಅವರಿಗೆ ಕೋಟಿ ಕೊಟಿ ಜನರ ಆಶೀರ್ವಾದವಿದೆ, ಮರೆಯಬೇಡಿ..
ಮುಂದಿನ ಸಂವಾದ ಆರೋಗ್ಯಕರವಾಗಿರಲಿ.. :)

No comments:

Post a Comment